top of page
Banner1.jpg

Bhoomi Puthrer.. Baila Bakuder!

ಬೈಲ ಬಾಕುಡೆರ್

ಭೂಮಿ ಪುತ್ರೆರ್

Welcome to
Bakuda Samaja Seva Samithi.

ಬಾಕುಡ ಸಮಾಜ ಸೇವಾ ಸಮಿತಿಗೆ ಸ್ವಾಗತ

ಪವಿತ್ರವಾದ ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿವೆ. ಅದರಲ್ಲಿ ಪರಿಶಿಷ್ಟ ಜಾತಿಗೆ ಸೇರಲ್ಪಡುವ "ಬಾಕುಡ" ಎಂಬ ಸಮುದಾಯ ಒಂದಾಗಿದೆ. ಕೇರಳ ರಾಜ್ಯದ ಗಡಿಪ್ರದೇಶವಾದ ಕಾಸರಗೋಡು, ವಯನಾಡು ಜಿಲ್ಲೆ, ಕರ್ನಾಟಕ ರಾಜ್ಯದ ಗಡಿಪ್ರದೇಶವಾದ ದಕ್ಷಿಣಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು, ಕೊಡಗು ಇತ್ಯಾದಿ ಕಡೆಗಳಲ್ಲಿ ಹೆಚ್ಚಾಗಿ ಬಹುಸಂಖ್ಯಾತರಾಗಿದ್ದು ತುಳುನಾಡಿನ ಮೂಲನಿವಾಸಿಗಳಲ್ಲಿ ಬಾಕುಡ ಸಮುದಾಯದವರು "ಭೂಮಿಪುತ್ರರು" ಎಂದು ಬಿಂಬಿತರಾಗಿದ್ದಾರೆ.


       ತುಳುನಾಡಿನ ದೈವರಾಧನೆ ಮತ್ತು ನಾಗರಾಧನೆಯನ್ನು ಬಹಳ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಲವು ಸಮುದಾಯಗಳಲ್ಲಿ ಬಾಕುಡ ಸಮುದಾಯದವರು ಪ್ರಮುಖರು. ಅದರಲ್ಲೂ "ನಾಗರಾಧನೆ" ಎಂಬುದು ಪ್ರಾಚೀನ ಕಾಲದ ಆರಾಧನಾ ಸಂಸ್ಕೃತಿಯಾಗಿದೆ. ತುಳುನಾಡಿನ ಮಣ್ಣಿನ ಹಕ್ಕುದಾರರಾದ ಬಾಕುಡರು ನಾಗರಾಧಕರು. "ನಾಗ" ಬಾಕುಡ ಸಮುದಾಯದ ಕುಲದೈವವಾಗಿದೆ. ನಾಗಬನದಲ್ಲಿ ನಾಗಸೇವೆ ಆರಾಧನೆ ಮಾಡಿ ತನು ಎರೆಯುವ ಸಮುದಾಯವೆಂದರೆ ಬಾಕುಡರು ಮಾತ್ರ. ನಾಗರಾಧನೆಯ ಮೂಲ ಜನಾಂಗವೇ ಬಾಕುಡರು. ನಾಗದೇವರಿಗೆ ಕೋಲಕೊಟ್ಟು ಆರಾಧನೆ ಮಾಡುವ ಏಕೈಕ ಸಮುದಾಯವರೆಂದರೆ, ಬಾಕುಡರು. ಮತ್ತು  ನಾಗಕೋಲವನ್ನು "ಬಿರ್ಮೆರೆ ನಲಿಕೆ" ಎಂದು ತುಳುವಿನಲ್ಲಿ ಹೇಳುತ್ತಾರೆ.

ವಾರ್ಷಿಕ ನೇಮೋತ್ಸವ 

ಬೈಲ ಬಾಕುಡ ಸಮುದಾಯದ 18 ದೈವಸ್ಥಾನಗಳ ವಾರ್ಷಿಕ ನೇಮೋತ್ಸವವು ಪ್ರತಿ ವರ್ಷವೂ ಮಾರ್ಚ್ 16ರಿಂದ ಮಾರ್ಚ್ 29 ರ ನಡುವೆ  ನಡೆಯುತ್ತದೆ. 

adka2_edited.jpg

ಸಮಾಜದ ಗುರಿ

ಬಾಕುಡ ಸಮುದಾಯದ ಉದ್ಧಾರವೇ ಸಮಾಜದ ಗುರಿ.

main-qimg-073808868b3abe50e70e93d2bdf5af62-lq.jpg

ಬಾಕುಡ 
ಸಮಾಜ
ಭವನ 

ಬಾಕುಡ ಸಮಾಜದ ಭವನ ನಿರ್ಮಾಣ ಕಾರ್ಯಗಳು ಪುರೋಗಮಿಸುತ್ತಿದೆ. 

sirimudi bidugade.jpeg

ಸಿರಿಮುಡಿ ಕೃತಿ 

ಬೈಲ ಬಾಕುಡರ ಹುಟ್ಟು, ನಾಗಾರಾಧನೆ, ಭೂತಾರಾಧನೆ, ಮತ್ತು ಆಚಾರ ನಂಬಿಕೆಗಳನ್ನು "ಸಿರಿಮುಡಿ" ಎಂಬ ಕೃತಿಯ ಮೂಲಕ ಅಧ್ಯಾಪಕರು ಲೇಖಕರು ಸುರೇಶ ಮಾಸ್ಟರ್ ಮಂಗಲ್ಪಾಡಿ ತಿಳಿಸಿದ್ದಾರೆ.

Gallery 

2_edited.jpg

What our prominent personalities says...

ಬಾಕುಡ ಸಮುದಾಯ ತುಳುನಾಡಿನ ಪ್ರಾಚೀನ ಸಮುದಾಯಗಳಲ್ಲಿ ಒಂದು. ಭೂಮಿಪುತ್ರ ರಾದ  ಬೈಲಬಾಕುಡರ   ನಾಗಾರಾಧನೆ  ವಿಶಿಷ್ಟ ವಾದೂದು. ಬಾಕುಡರ 18 ದೈವಸ್ಥಾನ 18 ಕುಟುಂಬ ಪ್ರತಿ ಕುಟುಂಬದಲ್ಲೂ 4 ತರವಾಡುಗಳು ,ನಾಗಬನಗಳು ಹೀಗೆ ತುಳುನಾಡಿನ ಸಂಸ್ಕೃತಿ ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ನಮ್ಮ ಸಮುದಾಯವನ್ನು ಉಳಿಸಿ ಬೆಳೆಸುವ ಹಕ್ಕು ನಮಗಿದೆ. ವಿದ್ಯಾಬ್ಯಾಸ, ಉದ್ಯೋಗ, ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯಬೇಕು. ನಮ್ಮದೇ ಆದ ಸಮುದಾಯ ಭವನ ನಿರ್ಮಾಣ ಆಗಬೇಕು. ಭಾರತದ ಚರಿತ್ರೆಯಲ್ಲಿ  ನಮ್ಮ ಸಮುದಾಯ ಹೆಸರು ವಾಸಿಯಾಗಬೇಕು ಯುವಪೀಳಿಗೆ ಇದರ ಬಗ್ಗೆ ಎಚ್ಚತ್ತು ನಮ್ಮ ಸಮುದಾಯದ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು. ಬಾಕುಡ ಸಮಾಜ ನಮ್ಮ ಹೆಮ್ಮೆ 🙏🏾

Sujatha Shiva Manjeshwara, President of BSSR(R)

Recent Events

bottom of page